ಹೇಮಾವತಿ ಹೋರಾಟ ದಿಕ್ಕು ತಪ್ಪಿಸಬೇಡಿ: ಶಾಸಕ ಜ್ಯೋತಿಗಣೇಶ್

1 min read

 

ಹೇಮಾವತಿ ಹೋರಾಟ ದಿಕ್ಕು ತಪ್ಪಿಸಬೇಡಿ: ಶಾಸಕ ಜ್ಯೋತಿಗಣೇಶ್

Tumkurnews
ತುಮಕೂರು: ಹೇಮಾವತಿ ನೀರಿಗಾಗಿ ಮಾಡುತ್ತಿರುವ ಹೋರಾಟದ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ ಎಂದು ಆಡಳಿತ ಪಕ್ಷದ ಶಾಸಕರಿಗೆ ನಗರ ಶಾಸಕ ಜಿ.ಬಿ ಜ್ಯೋತಿಗಣೇಶ್ ಆಗ್ರಹಿಸಿದ್ದಾರೆ.

ಸೊಗಡು ಶಿವಣ್ಣ ಬಂಧನ: ವಿಡಿಯೋ
ಜಿಲ್ಲೆಯಲ್ಲಿ ಎಕ್ಸ್‌ಪ್ರೆಸ್ ಕೆನಾಲ್ ವಿರುದ್ಧ ನಡೆಯುತ್ತಿರುವ ಹೋರಾಟವು ಪಕ್ಷಾತೀತವಾಗಿ ನಡೆಯುತ್ತಿದ್ದು, ಜಿಲ್ಲೆಯ ರೈತರು ಹಾಗೂ ನಾಗರಿಕರ ಧ್ವನಿಯಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯ ಸಮ್ಮತವಾದ ಹೋರಾಟ ಜಿಲ್ಲಾದ್ಯಾಂತ ನಡೆಯುತ್ತಿದ್ದು, ಈ ಹೋರಾಟದಲ್ಲಿ ಆಡಳಿತ ಪಕ್ಷದ ಶಾಸಕರು ಸಹ ಪಾಲ್ಗೊಂಡು ನಮ್ಮ ಜಿಲ್ಲೆಗೆ ನ್ಯಾಯ ಒದಗಿಸಬೇಕಾಗಿತ್ತು. ಆದರೆ ಹೇಮಾವತಿ ನೀರಿಗಾಗಿ ಮಾಡುತ್ತಿರುವ ಹೋರಾಟದ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ ಎಂದು ಆಡಳಿತ ಪಕ್ಷದ ಶಾಸಕರಿಗೆ ತುಮಕೂರು ನಗರದ ಶಾಸಕ ಜಿ.ಬಿ. ಜ್ಯೋತಿಗಣೇಶ್ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

 

You May Also Like

More From Author

+ There are no comments

Add yours