ತುಮಕೂರು ನಗರ: ಬೆಸ್ಕಾಂ ಗ್ರಾಹಕರ ಕುಂದು ಕೊರತೆ ಸಭೆ

1 min read

 

ಬೆವಿಕಂ ಗ್ರಾಹಕರ ಕುಂದು ಕೊರತೆಗಳ ಸಂವಾದ ಸಭೆ

Tumkurnews
ತುಮಕೂರು: ನಗರ ಉಪ ವಿಭಾಗ-1 ಬೆವಿಕಂ ನಲ್ಲಿ ಮೇ 18ರಂದು ಮಧ್ಯಾಹ್ನ 3:30 ರಿಂದ ಸಂಜೆ 5:30ರವರೆಗೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಅವರ ಅಧ್ಯಕ್ಷತೆಯಲ್ಲಿ ಗ್ರಾಹಕರ ಸಂವಾದ ಸಭೆಯನ್ನು ಏರ್ಪಡಿಸಲಾಗಿದೆ.
ಸಭೆಗೆ ಬೆ.ವಿ.ಕಂ’ನ ನಗರ ಉಪ ವಿಭಾಗ-1ರ ಉತ್ತರ, ಕೇಂದ್ರ, ಪಶ್ಚಿಮಶಾಖೆಗಳ ವ್ಯಾಪ್ತಿಯಲ್ಲಿ ಬರುವ ಅರಳೇಪೇಟೆ ಹಾಗೂ ಕೆ.ಆರ್.ಬಡಾವಣೆ, ಕುವೆಂಪುನಗರ, ಆದರ್ಶನಗರ, ಹನುಮಂತಪುರ, ಕೋತಿ ತೋಪು, ಶಾರಾದಾದೇವಿ ನಗರ, ಸಿರಾಗೇಟ್, ಅರಕೆರೆ, ಊರುಕೆರೆ, ರಂಗಾಪುರ, ಯಲ್ಲಾಪುರ, ಅನ್ನೇನಹಳ್ಳಿ, ಅಂತರಸನಹಳ್ಳಿ, ಕುಪ್ಪೂರು, ದಿಬ್ಬೂರು, ಎಸ್.ಎನ್.ಪಾಳ್ಯ, ಪಿ.ಎಸ್.ಪಾಳ್ಯ, ಹೆಬ್ಬಾಕಾ, ಸಂತೇಪೇಟೆ, ಮಂಡಿಪೇಟೆ, ಗಾರ್ಡನ್ ರಸ್ತೆ, ಜೈಪುರ, ಪಿ.ಹೆಚ್.ಕಾಲೋನಿ ಹೆಚ್.ಟಿ ಮತ್ತು ಎಲ್.ಟಿ ಗ್ರಾಹಕರು ಸಭೆಗೆ ಹಾಜರಾಗಿ ನಗರ ಉಪವಿಭಾಗ-1ಕ್ಕೆ ಸಂಬಂಧಿಸಿದಂತೆ ತಮ್ಮ ಸೂಕ್ತ ಸಲಹೆ ಅಥವಾ ದೂರುಗಳಿದ್ದಲ್ಲಿ ಸಲ್ಲಿಸಿ ಸಭೆಯಲ್ಲಿ ದೂರು ಸಲ್ಲಿಸಬಹುದು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾಗರಾಜು ಹೆಚ್.ಪಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You May Also Like

More From Author

+ There are no comments

Add yours