ವಿದ್ಯುತ್ ವ್ಯತ್ಯಯ
Tumkurnews
ತುಮಕೂರು; ಬೆವಿಕಂ ನಗರ ಉಪ ವಿಭಾಗ-1ರ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಂಡಿರುವುದರಿಂದ ಜುಲೈ 18 ರಿಂದ 28ರವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀರಾಮನಗರ, ಹೊರಪೇಟೆ, ವಿವೇಕಾನಂದ ರಸ್ತೆ, ಕೆ.ಆರ್.ಬಡಾವಣೆ, ಬಾರ್ಲೈನ್, ಎಂ.ಜಿ.ರಸ್ತೆ, ಅಶೋಕರಸ್ತೆ, ಕೋತಿತೋಪು, ಪಾಂಡುರಂಗ ನಗರ, ಜಾಮೀಯಾ ಮಸೀದಿ, ಅಗ್ರಹಾರ, ಕ್ರಿಶ್ಚಿಯನ್ ಸ್ಟ್ರೀಟ್, ಗೋವಿಂದ ನಗರ, ರಿಂಗ್ ರಸ್ತೆ, ಗುಬ್ಬಿ ಗೇಟ್, ಕುಂಟಮ್ಮನ ತೋಟ, ದಿಬ್ಬೂರು, ಬಂಡೇಮನೆ ಚೌಟ್ರಿ, ಹೆಚ್.ಪಿ.ಪೆಟ್ರೋಲ್ ಬಂಕ್, ಬಿ.ಜಿ.ಪಾಳ್ಯ ಸರ್ಕಲ್, ಯುಜಿಡಿ, ದಾನಾ ಪ್ಯಾಲೇಸ್ ಹಿಂಭಾಗ, ಈದ್ಗಾಮೊಹಲ್ಲ, ಪಿ.ಹೆಚ್. ಕಾಲೋನಿ, ವಿನೋಬ ನಗರ, ಲೇಬರ್ ಕಾಲೋನಿ, ಹೆಗಡೆ ಕಾಲೋನಿ, ಜೈಪುರ, ತಿಲಕ್ ಪಾರ್ಕ್, ಕೆ.ಹೆಚ್.ಬಿ. ಕಾಲೋನಿ, ಕಾಲ್ಟ್ಯಾಕ್ಸ್ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಅವರು ಕೋರಿದ್ದಾರೆ.
+ There are no comments
Add yours